![](https://blogger.googleusercontent.com/img/b/R29vZ2xl/AVvXsEgyxULRrd7ydJR8qs9BFPBpSxyXEdi1wMTGNkSnXktdSzZo8HEPgy3zlKYKJwkUIat3YxRYjWUSPYt76QV-0hLoS4EYFFzVLGHmzzQyIp1Lm1WzFHDa_qk-oQeRxceJJNaNBVfIP0mkailx/s320/hand.jpg)
ಮತ್ತೆ ಮತ್ತೆ ಅಲವತ್ತುಕೊಳ್ಳುತ್ತೇನೆ
ನಿನ್ನೊಂದಿಗೆ ...
ಕಳೆದುಹೋದ ಅಮ್ಮನ
ನೆನಪಿನಲ್ಲಿ ಸಿಗುವುದು ಕೂಡ
ನೀನೊಬ್ಬಳೆ?!
ಮಧ್ಯರಾತ್ರಿಗಳಲಿ ನಿಲ್ಲಿಸಿದ
ನನ್ನ ಅಳು ...
ನಿನ್ನದೊಂದು ತಲೆ ನೇವರಿಕೆಗೆ
ನೆಮ್ಮದಿಯ ನಿದ್ದೆ ಮಾಡಿತ್ತು.
ನೋಡು... ಮನಸು ರಿಕ್ತ,
ರಕ್ತಿಯ ಹೂಗಳೆಲ್ಲಾ
ಆ ಕಡಲ ತಡಿಯ ಉಪ್ಪು ನೀರಿನಲ್ಲಿ
ನನ್ನ ಉಸಿರು ಸಿಕ್ಕಿದಂತೆ...
ಬೆಂದ ಬೇಳೆಯ ಕಾಳು!
ವಿಶ್ವಾಸ- ವಿದ್ರೋಹಗಳದ್ದು
ಅರಿವಿನ ಅಹಂಕಾರ.
ನಾನೋ ಏಕಾಂತಗಳ ಜಡಿಮಳೆಗೆ
ಸಿಕ್ಕ ತೆಂಗಿನಮರ !
ರಿಕ್ತ ಮನಸಿನಲಿ ರಕ್ತಿಯ ಹೂವಿಲ್ಲ
ಬಾ.... ಮತ್ತೊಮ್ಮೆ ...
ಎರಡೊಮ್ಮೆ...
ತಲೆ ನೇವರಿಸಿ ಬಿಡು,
ಕಳೆದು ಹೋಗಲಿ ಬಂಧ...
ಅಧ್ಯಾಯ ಮುಗಿದು... ಆರಂಭವಾಗಲಿ ಹೊಸಕಾವ್ಯ.
No comments:
Post a Comment