![](https://blogger.googleusercontent.com/img/b/R29vZ2xl/AVvXsEhiObk5zgeVSjU00tH52bpx1Dn73vdL9P-GM07PYYJnOKKfrwZY7gDXrRw1L_1sNMq21rhQ5CQn0nPoMkkYb_hmJBgGs2uzZ9tYTUB3Z213qwfHbbJRj-EG-geZl9fCWFSlJQkS5xoA4imM/s400/imagesCA9MYO4D.jpg)
ಮೊದಲ ಮುಂಗಾರ
ಮಳೆಗೆ ಮೈಯೊಡ್ಡಿ
ನಿಂತ ಭೂತಾಯ
ದೇಹ ಘಮ್ ಎಂದಾಗ
ನನ್ನ ಮಾತು ಮಥಿಸಿ,
ಕಾವ್ಯ ಕಾರಣವಾಗುತ್ತದೆ.
ರಗರಗನೆ ಉರಿವ
ಸೂರ್ಯನ ಬೆಳಕು
ಚಂದ್ರನಿಗೆ ನೆರಳಾಗಿ
ಬೆಳದಿಂಗಳಾದಾಗ
ನನ್ನ ಭಾವ ಬಸಿದು
ಜೀವ ಚಿಲುಮೆಯಾಗುತ್ತದೆ.
ಕೆಂಡದ ಬಣ್ಣದ
ಮಲ್ಲಿಗ ಮೈ..ಮುಖದ
ಅವಳ ಒಲವಿನ ನಗು
ಶಬ್ದತೀರದಲೆ ಚುಂಬಿಸಿದಾಗ
ಹೃದಯ ಹೂಬನವಾಗುತ್ತದೆ.
No comments:
Post a Comment