Tuesday, December 29, 2009

ಗಾಂಧಿ ಮತ್ತು ಸ್ವಾತಂತ್ರ್ಯ


ಕುಂಕುಮ ಭೂಮಿಯ ತುಂಬಾ
ಮಲ್ಲಿಗೆ ಬಳ್ಳಿಗಳ ನೆಟ್ಟ ,
ಅವ ಕೊಟ್ಟ ಬಿಳಿಯ ಹೂಗಳು
ನಮ್ಮ ರಕ್ತ ಸಿಕ್ತ
ಕೈಗಳಲಿ ನಗುತ್ತಲಿವೆ!

ಅವನ ಎದೆಗೂಡಿನ
ಎಲುಬುಗಳಿಂದ ಬಿಡಿಸಿಕೊಂಡ
ಪಾರಿವಾಳದ ರೆಕ್ಕೆಗಳು
ನಮ್ಮ ತೆಕ್ಕೆಗಳಲಿ ಬಂಧಿ..!!
ಮುಷ್ಟಿಗಳಲಿ ಸಿಕ್ಕಿಕೊಂಡಿದೆ,
ಅದರ ಉಸಿರು.

ಉರಿವ ನಮ್ಮ ಚರ್ಮದ
ಮೈಬಿಸಿಗೆ ಸೀದುಕಂಟಾದ
ಅದರ ಪುಕ್ಕಗಳ ವಾಸನೆ..
ಬೆತ್ತಲಾಗಿದೆ ಹಕ್ಕಿ,
ಬಿಳಿಯ ಚಾದರ ಹೊದ್ದಿಸುವ
ಮೊದಲು ಮುಷ್ಠಿ ಸಡಿಲಿಸಿ!!!

No comments:

Post a Comment