Friday, April 26, 2013

ಬೇಲಿಯ ಹೂ

ಕಳೆದುಕೊಂಡು ಪರಿತಪಿಸುತ್ತಿರುವ
ಒಲವನ್ನು ಒಮ್ಮೆ
ಕರುಣಿಸಿಬಿಡು ಭಗವಂತ
ನೇಸರನ ಎಳೆಬಿಸಿಲಿಗೆ ಕಾಯುತ್ತಿರುವ
ಬೇಲಿಯ ಹೂ, ನಾನು.
ಅರಳಿಬಿಡುತ್ತೇನೆ
ಬರುವ ಮುಂಗಾರಿಗೆ ಸಿಕ್ಕು
ಉದುರುವ ಮುನ್ನ.
ಇದೊಂದು ಅಮೃತಗಳಿಗೆ
ನನ್ನದಾಗಲಿ, ನಿನ್ನೊಲವಿನಿಂದ
ಅರಳಿದ್ದೇ ಆದರೆ
ಮುಂದಿನ ಏಳೇಳು ಜನುಮವೂ
ನಿನ್ನ ತಿರುವಡಿಯಲ್ಲಿ ಹೂವಾಗುತ್ತೇನೆ. ~ RP

No comments:

Post a Comment