Showing posts with label ಕಲ್ಲು ಹೂವೊಂದು ಮೈನೆರೆತು. Show all posts
Showing posts with label ಕಲ್ಲು ಹೂವೊಂದು ಮೈನೆರೆತು. Show all posts

Monday, May 26, 2014

ನಾನು ಆಲಿಕಲ್ಲು



ನಾನು
ಮುಂಗಾರು ಮರೆತು
ಎಸೆದು ಹೋದ ಆಲಿಕಲ್ಲು.

ಕೆಳಕ್ಕೆ ಬಿದ್ದಾಗ
ಪುಟ್ಟ ಮಕ್ಕಳ ಬೊಗಸೆ ತುಂಬಿಕೊಳ್ಳುತ್ತೇನೆ
ಮನುಷ್ಯನ  ಎದೆಯಂಗಳದಲ್ಲಿ
ನೆನಪಾಗಿ ಕರಗುತ್ತೇನೆ!

ಆದರೂ ನಾ ಬರುವುದನ್ನು
ದರಿದ್ರಕಾಲವೆನ್ನಲಾಗಿದೆ .
ಆದರೂ ನಾ ಬಂದೇ ಬರುತ್ತೇನೆ. 
ಎಲ್ಲರಂತೆ ನನಗೂ ಬದುಕಲು ರಹದಾರಿಯಿದೆ. 

ನಿನ್ನ ಛಾತಿ

ನಿಜವೇ..
ನಿನಗೆ ಛಾತಿ ಇದ್ದರೆ
ಬಾ
ನನ್ನದೆಯ ಒಳಗೆ ನಿನ್ನ ನದಿ ಹರಿಸು!

ನೀ ಹರಿದು ಬಂದ್ದದ್ದೇ ಆದರೆ
ಈ ಬಯಲಬಾಗಿಲ ಬೀಗಗಳು
ಕರಗಿ ನಿನ್ನ ಕಾಲ್ಗೆಜ್ಜೆಯಾಗುತ್ತವೆ.
ಅಲೆಯ ನೊರೆಗಳು ತುಂಬಿ
ಗಾಳಿಗುಳ್ಳೆ ಒಡೆದು, ಆಹಾ!
ಅದೇನು ತಾಜಾ ಉಸಿರು
ಹೊಸಒಲೆಯಲ್ಲಿ ಉರಿವ ಬೆಂಕಿ.
ಮತ್ಸ್ಯಗಂಧ ತುಂಬಿದ
ನಿನ್ನೊಡಲಿನಲ್ಲಿ ನಾ ಜೇನಾಗಿಳಿಯುತ್ತೇನೆ ~ ಕಲ್ಲು ಹೂವೊಂದು ಮೈನೆರೆತು