Monday, May 26, 2014

ನಾನು ಆಲಿಕಲ್ಲು



ನಾನು
ಮುಂಗಾರು ಮರೆತು
ಎಸೆದು ಹೋದ ಆಲಿಕಲ್ಲು.

ಕೆಳಕ್ಕೆ ಬಿದ್ದಾಗ
ಪುಟ್ಟ ಮಕ್ಕಳ ಬೊಗಸೆ ತುಂಬಿಕೊಳ್ಳುತ್ತೇನೆ
ಮನುಷ್ಯನ  ಎದೆಯಂಗಳದಲ್ಲಿ
ನೆನಪಾಗಿ ಕರಗುತ್ತೇನೆ!

ಆದರೂ ನಾ ಬರುವುದನ್ನು
ದರಿದ್ರಕಾಲವೆನ್ನಲಾಗಿದೆ .
ಆದರೂ ನಾ ಬಂದೇ ಬರುತ್ತೇನೆ. 
ಎಲ್ಲರಂತೆ ನನಗೂ ಬದುಕಲು ರಹದಾರಿಯಿದೆ. 

No comments:

Post a Comment