Friday, August 23, 2013

ಗುರುವಿನ ದಾರಿ ಕಾಯುತ್ತಾ

ನೀನು ಬಂಧವ ಹರಿವರೆಗೂ
ಭವಮಂಡಲ ದಾಟಲಾರೆ..
ಕರುಣಿಸಿಬಿಡು ದೀಕ್ಷೆ..
ನಿನ್ನ ಕಣ್ಣ ಕಿರಣದಲಿ
ಸುಟ್ಟು ಹೋಗಲಿ ಈ ಕಾಯ
ಬಿಟ್ಟು ಬಿಡಲಿ ಈ ಮಾಯಾ

ನಿನ್ನ ಕರೆವಿಗೆ ಕಾದಿದ್ದೇನೆ
ಗುರುವೆ..
ನನ್ನ ಮಿಣುಕು ಹುಳವೇ
ಕಾದ ಕತ್ತಲಿಗೆ
ಬೆಳಕ ತಂಪನೆರವ
ನನ್ನ ಬೆಳಕಿನ ಹುಳವೇ
ಬಾರಯ್ಯ.. ನನ್ನಯ್ಯ
ತಾರೋ ಜೋಗಯ್ಯ
ಮುತ್ತಿನ ಜೋಳಿಗೆಯ

ಹುಟ್ಟಿನ ಉಡುದಾರ
ಜಾತಿಯ ಜನಿವಾರ
ಕಿತ್ತು ಕರೆದು ಹೋಗು
ಗುರುವೇ
ಬೆತ್ತಲು ಬರಿದಾಗಿ
ಆಗಸದ ದಾರಿಯಲಿ
ಏಕವಾಗಿ ನಿಂತಿದ್ದೇನೆ
ಗುರುವೇ,,,,
ಬಾರಪ್ಪ ಈ ಮಳೆಯು
ನಿಲ್ಲುವುದರೊಳಗಾಗಿ
ನಿನ್ನ ಮಹಾಮನೆಗೆ
ಕರೆದೊಯ್ದುಬಿಡುವಂತೆ.... ~ ಆರ್. ಪಿ.

No comments:

Post a Comment