Sunday, May 11, 2014

ವಚನಾನುವಾಚನ - ೧

ಎಲ್ಲ ನೋವುಗಳ ಹಿಡಿದು ಹಿಂಡಿ
ಘನವಾಗಿಪ್ಪ ಕಣ್ಣೀರ ಕೂಡಿ
ಒಂದು ಬಟ್ಟಲಿಗೆ ಸುರಿದುಬಿಟ್ಟೆ.
ಬಟ್ಟಲು ಹಿಡಿದು ಹೊರಬಂದರೆ
ಅಯ್ಯಾ
ಮುಗಿಲ ತಣಿಗೆಯ ತುಂಬಾ
ನೋವನ್ನೇ ಆರೋಗಣೆಯ ಮಾಡುತಿದ್ದ
ಧರೆಗೆ ದೊಡ್ಡವರ ಕಂಡೆ.

No comments:

Post a Comment