![](https://blogger.googleusercontent.com/img/b/R29vZ2xl/AVvXsEgF1uV0kUFRNQtGdeTROZo8Hdiu_blzFN5y2xmyGHZU91Y5jVqzMSgbVpsEuenoaIBiFHfrS0iPEbWA_VOiF1pH35yLNZYKH5yFThNaUzOQ7IP5f-BvpwLdEjSHIYYs7jnmjxywoQ1T6aFU/s320/453564556_0de4b93ee4.jpg)
ಕಣ್ಣಿಗೂ... ಬಯಕೆ
ಕಡಲ ತಡಿಯ ಬೆತ್ತಲ ಸ್ನಾನ.....,
ಚಂದಿರನಲ್ಲೇ ಮಿಂದಂತೆ
ನರಗಳಿಗೆಲ್ಲಾ ವಿದ್ಯುತ್ ಸಂಪರ್ಕ!
ಮಧ್ಯರಾತ್ರಿಯಾದರೂ ಅರಸುತಿದೆ
ಕಿನಾರೆಯ ಇಂಚಿಂಚು
ಸೌಂದರ್ಯದ ಹಪಾಹಪಿ
ಉದರಾಂತಾರಾಳದ ಕೆಳಗೆ
ಏನೋ ತಹತಹ.
ರಾತ್ರಿ ಸರಿದು ಮುಂದೆ
ಪ್ರಹರ ಮೂರು...
ತಟದಲ್ಲಿ ಮೌನ ಕ್ರಾಂತಿ ,
ಮಾನುಷಶಾಂತಿ.
ಅಲೆಯ ಶಬ್ದಗಳಲಿ
ಅವಿತ ಕಾವ್ಯದ ಸಾಲುಗಳು
ರಿಂಗಣಿಸುತ್ತಲೇ ಇವೆ ,
ಇಳಿದು-ಏರಿ ಭೋರ್ಗೆರೆದು....
ನನ್ನ ಕರೆದು ಬಾರೋ ಮೋಹನಮುರಳಿ!
ಕಣ್ಣುಗಳು ಇನ್ನಷ್ಟು ಆಶಾವಾದಿ
ಮುಚ್ಚಿ ಕಟ್ಟಿಕೊಳ್ಳುತ್ತವೆ ,
ಸಿಗದ ಅರೆನಗ್ನತೆಯ ಪ್ರತಿಮೆ!
ರಾತ್ರಿ ಅಳಿಸಿದ ರವಿ ನಕ್ಕಾಗ .....
ನಾನು ಮಾತ್ರ ಬೆತ್ತಲು
ಕಡಲು...ನೀರು ಸುತ್ತಲು.....
ಮತ್ತೆ ಕಣ್ಣುಗಳಲಿ ಸೌಂದರ್ಯದ ತೆವಲು.
No comments:
Post a Comment