Sunday, May 11, 2014

ಹೊಗೆಕ್ರಾಂತಿ

ಖಡ್ಗಗಳು
ಎದೆಗಳ ಇರಿಯುತ್ತಾ
ಹೋದುವು.
ಕೆಲವರು ಬೋನವ ಹಿಡಿದು
ರಕ್ತದ ರುಚಿ ನೋಡಿದರು.
ಬಿಸಿಗೆ ನಾಲಗೆ ಸುಟ್ಟಿ
ಅಕ್ಷರಗಳ ಮೇಲೆ ಬೋನವ
ಎಸೆದರು.
ಅಯ್ಯಾ,
ಕೆಂಪು ಕೆಂಪಾದ ರಕುತವೆಲ್ಲಾ
ಅಕ್ಷರವ ಮುತ್ತಲು
ಕಿಡಿ ಹೊತ್ತಿಸಿದರು.

ಮಕ್ಕಳ ಮೈಸುಟ್ಟು ಬೇಯುತ್ತಿವೆ.
ಅವರು ಬೀಡಿ ಹಚ್ಚಿ ನಶೆಯಲ್ಲಿದ್ದಾರೆ.
ಸೇದಿ ಬಿಟ್ಟ ಹೊಗೆಯು
ಇದುವೇ ಕ್ರಾಂತಿ ಕಾಣಿರೇ!!

No comments:

Post a Comment